Homeರಾಜ್ಯಶೃಂಗೇರಿ ಅಂಚೆ ಮತ ವಿವಾದ : ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ಬಿಜೆಪಿ ಮುಖಂಡರು

ಶೃಂಗೇರಿ ಅಂಚೆ ಮತ ವಿವಾದ : ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ಬಿಜೆಪಿ ಮುಖಂಡರು

Sringeri Postal Votes Controversy

ಬೆಂಗಳೂರು, ಮೇ.8 – ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಪೋಸ್ಟಲ್‌ ಮತ ಎಣಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿ ನಡೆದಿದೆ ಎಂದು ಬಿಜೆಪಿ ಹಿರಿಯ ಮುಖಂಡರು ಹಾಗೂ ಜೀವರಾಜ್‌ ಪರ ಚುನಾವಣಾ ಏಜೆಂಟ್‌ ರಾಮಸ್ವಾಮಿ ಮತ್ತು ಎಣಿಕೆ ಏಜೆಂಟ್‌ ಬಿ.ಎಸ್‌. ಸತೀಶ್‌ ತಿಳಿಸಿದ್ದಾರೆ.

ಕೊಪ್ಪದ ಪ್ರಸಿದ್ಧ ವೀರಭದ್ರಸ್ವಾಮಿ ದೇವಸ್ಥಾನ ಹಾಗೂ ಕಾರಣಿಕ ದೈವ ಸ್ಥಾನವಾದ ಗಬ್ಬಾನೆ ಶ್ರೀ ಭೂತರಾಯ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಅವರು ಈ ಹೇಳಿಕೆ ನೀಡಿದ್ದಾರೆ.

2023ರ ಮೇ 13ರಂದು ನಡೆದ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಶಾಸಕ ಜೀವರಾಜ್‌ ಅವರ ಆರೋಪದ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರದ ಮತಗಳ ಮರು ಎಣಿಕೆ ರಾಜ್ಯದಾದ್ಯಂತ ಕುತೂಹಲ ಮೂಡಿಸಿದೆ. ರಾಜ್ಯ ಚುನಾವಣಾ ಆಯೋಗ ಸಮಗ್ರ ತನಿಖೆ ನಡೆಸಿದರೆ ಸತ್ಯ ಬಹಿರಂಗವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

1993ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎಸ್‌. ಸತೀಶ್‌, 2023ರ ಚುನಾವಣೆಯಲ್ಲಿ ಜೀವರಾಜ್‌ ಅವರ ಪರ ಎಣಿಕೆ ಏಜೆಂಟ್‌గా ಕೆಲಸ ಮಾಡಿದ್ದರು. ಅವರು ಕೊಪ್ಪದ ಪುರಾತನ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಹಾಗೂ ಗಬ್ಬಾನೆ ಶ್ರೀ ಭೂತರಾಯ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಹೇಳಿದ್ದಾರೆ ಎಂದು ಅನಿಲ್‌ ಹೊಸಕೊಪ್ಪ ತಿಳಿಸಿದ್ದಾರೆ.

ಇದೇ ವೇಳೆ, ಸುಧೀರ್‌ ಕುಮಾರ್‌ ಮುರೊಳ್ಳಿ ಹಾಗೂ ಟಿ.ಡಿ. ರಾಜೇಗೌಡ ಅವರು ಈ ಹಿಂದೆ ಮಾಡಿದ್ದ ಹೇಳಿಕೆಗಳಿಗೆ ಇದರಿಂದ ಮತ್ತಷ್ಟು ಪುಷ್ಟಿ ದೊರೆತಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News