Friday, May 3, 2024
Homeರಾಜಕೀಯಬಾಂಬ್ ಇಡುವವನು ಬ್ರದರ್, ಬೆಂಕಿ ಹಚ್ಚುವವನು ಅಮಾಯಕ : ಬಿಜೆಪಿ ಕಿಡಿ

ಬಾಂಬ್ ಇಡುವವನು ಬ್ರದರ್, ಬೆಂಕಿ ಹಚ್ಚುವವನು ಅಮಾಯಕ : ಬಿಜೆಪಿ ಕಿಡಿ

ಬೆಂಗಳೂರು,ಮಾ.2- ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಎಂಥಾ ದೇಶದ್ರೋಹವೇ ನಡೆದರೂ ಅವರನ್ನೂ ಸಹ ಸಮರ್ಥಿಸಿಕೊಂಡು, ರಕ್ಷಿಸಲು ಯತ್ನಿಸುತ್ತಾರೆ ಎಂಬುದಕ್ಕೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದ ಕೂಗಿರುವ ಪ್ರಕರಣವೇ ಸಾಕ್ಷಿ ಎಂದು ಬಿಜೆಪಿ ಕೆಂಡಕಾರಿದೆ.

ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಅವರು, ಅದು ಪಾಕಿಸ್ತಾನ್ ಜಿಂದಾಬಾದ್ ಅಲ್ಲ, ನಾಸೀರ್ ಸಾಬ್ ಜಿಂದಾಬಾದ್ ಎಂದು ವಿಷಯ ತಿರುಚಿ, ದೇಶದ್ರೋಹಿಗಳನ್ನು ಬೆಂಬಲಿಸಿದ್ದು ಅತ್ಯಂತ ದುರಂತ ಎಂದು ವಾಗ್ದಾಳಿ ನಡೆಸಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಎಫ್.ಎಸ್.ಎಲ್ ವರದಿಯಲ್ಲಿ ಸಾಬೀತಾಗಿದೆ. ಸತ್ಯಕ್ಕೆ ಜಯವಿದೆ – ಸುಳ್ಳಿಗೆ ಸೋಲಿದೆ. ವಿಷಯವನ್ನು ತಿರುಚಲು ಯತ್ನಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಕಿಡಿಕಾರಿದೆ. ಬಾಂಬ್ ಇಡುವವನು ಬ್ರದರ್, ಬೆಂಕಿ ಹಚ್ಚುವವನು ಅಮಾಯಕ, ಖಾಸಗಿ ವಿಡಿಯೋ ಮಾಡುವುದು ಮಕ್ಕಳಾಟ, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವುದು ಅಭಿವ್ಯಕ್ತಿ ಸ್ವಾತಂತ್ರ್ಯ – ಇದು ಕಾಂಗ್ರೆಸ್ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

RELATED ARTICLES

Latest News