Saturday, May 11, 2024
Homeರಾಜಕೀಯಕಾಂಗ್ರೆಸ್ ಪರ ಪ್ರಗತಿಪರ ಸಾಹಿತಿಗಳು, ಚಿಂತಕರ ಬ್ಯಾಟಿಂಗ್

ಕಾಂಗ್ರೆಸ್ ಪರ ಪ್ರಗತಿಪರ ಸಾಹಿತಿಗಳು, ಚಿಂತಕರ ಬ್ಯಾಟಿಂಗ್

ಬೆಂಗಳೂರು, ಏ.22- ಬಿಜೆಪಿ ಮತ್ತು ಮಿತ್ರ ಪಕ್ಷ ಜೆಡಿಎಸ್ ಎಂಪಿಗಳು ಜಿಎಸ್ಟಿಯ ಕುರಿತು ಸಂಸತ್ನಲ್ಲಿ ಒಂದು ಮಾತನ್ನು ಎತ್ತದೆ ರಾಜ್ಯಕ್ಕೆ ಮೋಸ ಮಾಡಿ ದ್ದಾರೆ. ಆದ್ದರಿಂದ ಅವರನ್ನು ಬೆಂಗಳೂರಿನ ಜನ ಬೆಂಬಲಿಸಬಾರದು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ಪ್ರಗತಿಪರ ಚಿಂತಕರು ಎಂದು ಮನವಿ ಮಾಡಿದರು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಮತ್ತು ಚಿಂತಕ ತಲಕಾಡು ಚಿಕ್ಕರಂಗೇಗೌಡ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕರ್ನಾಟಕದ ಜಿಎಸ್ಟಿ ಪಾಲನ್ನು ರಾಜ್ಯಕ್ಕೆ ಕೊಡದೆ ಬೇರೆ ರಾಜ್ಯಗಳಿಗೆ ಕೊಟ್ಟು ಅನ್ಯಾಯ ಮಾಡಿದೆ.

ಇಲ್ಲಿ ಬಂದ ಆದಾಯವನ್ನು ಬೇರೆ ರಾಜ್ಯಗಳಿಗೆ ಹಂಚಿ ಉತ್ತರ ರಾಜ್ಯಗಳನ್ನು ಅಭಿವೃದ್ಧಿ ಮಾಡುತ್ತಿದೆ. ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದಿರುವ ಬಿಜೆಪಿಯನ್ನು ಈ ಬಾರಿ ಯಾರು ಬೆಂಬಲಿಸಬಾರದು ಎಂದರು.

ಬೆಂಗಳೂರು ಲೋಕಸಭಾ ಕ್ಷೇತ್ರಗಳಿಗೆ ನಿಂತಿರುವ ಡಿ.ಕೆ. ಸುರೇಶ್, ಸೌಮ್ಯ ರೆಡ್ಡಿ, ಮನ್ರ್ಸೂರ್ ಆಲಿಖಾನ್, ಪೊ್ರ. ರಾಜೀವ್ ಗೌಡ ಇವರನ್ನು ಬೆಂಬಲಿಸಬೇಕು ಇವರನ್ನು ಬೆಂಬಲಿಸಿದಾಗ ಮಾತ್ರ ನಮ್ಮ ಕನ್ನಡ ನಾಡು ನುಡಿ ಸಂಪತ್ತು ಮತ್ತು ನಮ್ಮ ಅಸ್ಮಿತೆ ಉಳಿಯುತ್ತದೆ. ಇಲ್ಲವಾದಲ್ಲಿ ಕನ್ನಡ ನಾಡಿನ ಜನತೆಗೆ ಉಳಿಗಾಲವಿಲ್ಲ ಎಂದು ಮೋದಿಯನ್ನು ವಿರೋಸಿದರು. ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಮುಕುಂದರಾಜï, ಭಾರತಿ ಶಂಕರ್ ಮುಂತಾದವರು.

RELATED ARTICLES

Latest News