Friday, April 17, 2026
Homeರಾಷ್ಟ್ರೀಯ3ನೇ ಬಾರಿ ಮರು ಆಯ್ಕೆಯಾದ ರಾಜಸಭೆ ಉಪಾಧ್ಯಕ್ಷರಿಗೆ ಗಣ್ಯರ ಅಭಿನಂದನೆ

3ನೇ ಬಾರಿ ಮರು ಆಯ್ಕೆಯಾದ ರಾಜಸಭೆ ಉಪಾಧ್ಯಕ್ಷರಿಗೆ ಗಣ್ಯರ ಅಭಿನಂದನೆ

Harivansh secures 3rd term as RS Deputy Chairman

ನವದೆಹಲಿ, ಏ.17- ರಾಜ್ಯಸಭೆಯ ಉಪಾಧ್ಯಕ್ಷರಾಗಿ ಮೂರನೇ ಬಾರಿ ಮರು ಆಯ್ಕೆಯಾದ ಹರಿವಂಶ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸದನದ ಎಲ್ಲಾ ಪಕ್ಷಗಳ ಸದಸ್ಯರು ಅಭಿನಂಧಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರು, ಹರಿವಂಶ ಅವರ ಮರು ಆಯ್ಕೆಯನ್ನು ಶ್ಲಾಘಿಸಿದರು. ತಾವು 4 ವರ್ಷಗಳಿಂದಲೂ ಉಪಾಧ್ಯಕ್ಷರನ್ನಾಗಿ ಅವರನ್ನು ನೋಡುತ್ತಿದ್ದೇನೆ. ಅಧಿವೇಶನ ನಡೆಸುವ ರೀತಿ ಅದ್ಭುತವಾಗಿದೆ. ಪೀಠದ ಘನತೆಯನ್ನು ಹೆಚ್ಚಿಸಿದೆ. ಸದನದಲ್ಲಿ ಶಿಸ್ತು ಪಾಲನೆಗೆ ಅವರ ಕ್ರಮಗಳು ಪ್ರಶಂಸನೀಯ ಎಂದರು.

ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಹರಿವಂಶ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಪ್ರಸ್ತಾಪಿಸಿದರು. ಪ್ರಧಾನಮಂತ್ರಿ ಅವರು ಕೂಡ ಹರಿವಂಶ ಅವರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತಮ ರಾಜಯಸಭೆ ಸದಸ್ಯತ್ವ ಅವಧಿ ಶೀಘ್ರವೇ ಮುಕ್ತಾಯವಾಗಲಿದ್ದು ಹರಿವಂಶ ಅವರ ಮುಂದಿನ ಕಾರ್ಯ ವೈಖರಿ ಯಶಸ್ಸು ಆಗಲಿ ಎಂದು ಹಾರೈಸಿದ್ದಾರೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷಗಳಿಗೆ ಸದನದಲ್ಲಿ ಹೆಚ್ಚಿನ ಅವಕಾಶ ಒದಗಿಸಬೇಕೆಂದು ಮನವಿ ಮಾಡಿದರು.ಹರಿವಂಶರ ಆಯ್ಕೆಯನ್ನು ಐತಿಹಾಸಿಕ ಎಂದು ಬಣ್ಣಿಸಿದ ಅವರು, ನಾಮನಿರ್ದೇಶಿತ ಸದಸ್ಯರಾಗಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ವ್ಯಕಿಯಾಗಿದ್ದಾರೆ. ಈ ಹುದ್ದೆಗೆ ನಿಮ ಆಯ್ಕೆ ಮತ್ತೊಂದು ಉದಾಹರಣೆಯಾಗಿದೆ. ನೀವು ಈ ಸ್ಥಾನಕ್ಕೆ ಯೋಗ್ಯರು ಎಂಬುದನ್ನು ಇದು ತೋರಿಸುತ್ತದೆ ಎಂದು ಖರ್ಗೆ ಹೇಳಿದರು.

ಇದೇ ವೇಳೆ, ಲೋಕಸಭೆಯಲ್ಲಿ ಉಪಸಭಾಧ್ಯಕ್ಷರ ಹುದ್ದೆ 2019ರಿಂದಲೂ ಖಾಲಿಯೇ ಉಳಿದಿರುವುದನ್ನು ಅವರು ಪ್ರಸ್ತಾಪಿಸಿದರು.ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೇವೆ. ಆದರೆ ಉಪಸಭಾಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇದರ ಅರ್ಥವೇನು? ಎಂದು ಪ್ರಶ್ನಿಸಿದರು. ಸರ್ಕಾರ ಆ ಹುದ್ದೆಯನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.

ಡಿಎಂಕೆ ಪರವಾಗಿ ಮಾತನಾಡಿದ ತಿರುಚಿ ಶಿವ ಅವರು ಹರಿವಂಶರ ಆಯ್ಕೆಯನ್ನು ಮೆಚ್ಚಿ, ಅವರು ನಾಲ್ಕು ಅವಧಿಗೆ ಉಪಾಧ್ಯಕ್ಷರಾಗಿದ್ದ ನಜಾ ಹೆಪ್ತುಲ್ಲಾ ಅವರ ದಾಖಲೆಯನ್ನು ಸಮನಾಗಿಸಲು ಅಥವಾ ಮೀರಿಸಲು ಸಾಧ್ಯವಾಗಲಿ ಎಂದು ಆಶಿಸಿದರು. ಹರಿವಂಶ್‌ ವಿವೇಕಿ ಮತ್ತು ಯೋಗ್ಯ ವ್ಯಕ್ತಿ ಎಂದು ವರ್ಣಿಸಿದರು.

ಚರ್ಚೆಗಳ ವೇಳೆ ಉಂಟಾಗುವ ಉದ್ವಿಗ್ನ ಪರಿಸ್ಥಿತಿಗಳಲ್ಲೂ ಶಾಂತ ಮನಸ್ಥಿತಿಯನ್ನು ಕಾಪಾಡಿಕೊಳ್ಳುವ ಅವರ ಸಾಮರ್ಥ್ಯವನ್ನು ಹಲವರು ಪ್ರಶಂಸಿಸಿದರು. ವೈಎಸ್‌‍ಆರ್‌ಸಿಪಿ ಸದಸ್ಯ ಸುಭಾಷ್‌ ಚಂದ್ರ ಬೋಸ್‌‍ ಪಿಲ್ಲಿ ಅವರು, ಸದನದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಕ್ರಮಬದ್ಧ ಕಾರ್ಯಚರಣೆಯನ್ನು ಹರಿವಂಶ ಖಚಿತಪಡಿಸಿದ್ದಾರೆ ಎಂದು ಹೇಳಿದರು.

ಎಐಎಡಿಎಂಕೆ ಸದಸ್ಯ ಎಂ. ತಂಬಿದುರೈ, ಅಧ್ಯಕ್ಷತೆ ವಹಿಸುವವರ ಯಶಸ್ಸುಸದಸ್ಯರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಇರುತ್ತದೆ ಎಂದು ಹೇಳಿದರು. ಆರ್‌ಜೆಡಿ ನಾಯಕ ಮನೋಜ್‌ ಝಾ, ಹರಿವಂಶರ ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್‌ ಅವರೊಂದಿಗೆ ಹೊಂದಿದ್ದ ಸಂಬಂಧವನ್ನು ಸ್ಮರಿಸಿದರು. ಇದೇ ವೇಳೆ, ಸಣ್ಣ ಪಕ್ಷಗಳಿಗೆ ಮಾತನಾಡಲು ಸಮರ್ಪಕ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಕೇಂದ್ರ ಸಚಿವ ರಾಮದಾಸ್‌‍ ಅಥಾವಳೆ ಅವರು ಹರಿವಂಶರನ್ನು ಅಭಿನಂದಿಸಿ, ಅವರ ಸಮಾಜವಾದಿ ಚಿಂತನೆಗಳನ್ನು ಬಿ.ಆರ್‌. ಅಂಬೇಡ್ಕರ್‌ ಮತ್ತು ರಾಮ ಮನೋಹರ್‌ ಲೋಹಿಯಾ ಅವರ ಪರಂಪರೆಯೊಂದಿಗೆ ಹೊಲಿಸಿದರು.

ಬಿಆರ್‌ಎಸ್‌‍ ಸದಸ್ಯ ವದ್ದಿರಾಜು ರವಿಚಂದ್ರ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು 20 ಕೋಟಿಗೆ ಹೆಚ್ಚಿಸಬೇಕೆಂದು ಮನವಿ ಮಾಡಿದರು.ಸಿಪಿಐ(ಎಂ) ಸದಸ್ಯ ಜಾನ್‌ ಬ್ರಿಟ್ಟಾಸ್‌‍ ಅವರು ಹರಿವಂಶರ ಪತ್ರಕರ್ತ ಹಿನ್ನೆಲೆ ಹಾಗೂ ಸದನದ ಗೌರವ ಕಾಪಾಡುವ ಬದ್ಧತೆಯನ್ನು ಪ್ರಶಂಸಿಸಿದರು. ಅಮಾನತುಗೊಂಡ ಸದಸ್ಯರನ್ನು ಮರು ಸೇರಿಸುವ ಪ್ರಯತ್ನಗಳನ್ನೂ ಅವರು ಸರಿಸಿದರು.

RELATED ARTICLES

Latest News