Homeಬೆಂಗಳೂರುಜು.29 ರಂದು ಗುರುಪೂರ್ಣಿಮಾ ಮಹೋತ್ಸವ

ಜು.29 ರಂದು ಗುರುಪೂರ್ಣಿಮಾ ಮಹೋತ್ಸವ

Guru Purnima Mahotsav on July 29

ಬೆಂಗಳೂರು,ಜು.24-ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮಿ ಮಹಾಪೀಠ ವತಿಯಿಂದ ಜು.29 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಜಯನಗರದಲ್ಲಿರುವ ಕುಚಲಾಂಬ ಕಲ್ಯಾಣ ಮಹಲ್‌ನಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಅಂದು ಮಧ್ಯಾಹ್ನ 12 ರಿಂದ 1.15 ರವರೆಗೆ ಶ್ರೀಮತ್‌ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಯೋಗೀಶ್ವರ ಸ್ವಾಮೀಜಿಯವರಿಂದ ಆಶೀರ್ವಚನ ಹಾಗೂ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಗಣ್ಯ ವ್ಯಕ್ತಿಗಳಿಗೆ ಸನಾನ ಸಮಾರಂಭ ನೆರವೇರಲಿದೆ.

ಈ ಪವಿತ್ರ ಗುರುಪೂರ್ಣಿಮಾ ಉತ್ಸವ ಹಾಗೂ ಸಾಧಕರ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಕ್ತಾಧಿಗಳು, ವಿದ್ವಾಂಸರು, ವೃತ್ತಿಪರರು, ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ಮನವಿ ಮಾಡಿದೆ.

RELATED ARTICLES

Latest News