Friday, May 3, 2024
Homeರಾಜಕೀಯಕಾಂಗ್ರೆಸ್ ಕನ್ನಡಿಗರ ಕಿವಿಮಲೆ ಕಲರ್ ಕಲರ್ ಹೂವು ಇಡುತ್ತಿದೆ : ಬಿಜೆಪಿ

ಕಾಂಗ್ರೆಸ್ ಕನ್ನಡಿಗರ ಕಿವಿಮಲೆ ಕಲರ್ ಕಲರ್ ಹೂವು ಇಡುತ್ತಿದೆ : ಬಿಜೆಪಿ

ಬೆಂಗಳೂರು,ನ.30- ಕಾಂಗ್ರೆಸ್ ಪಕ್ಷಕ್ಕೆ ಇದೀಗ ಕರ್ನಾಟಕಕ್ಕಿಂತಲೂ ತೆಲಂಗಾಣ ಚುನಾವಣೆ ಮುಖ್ಯವಾಗಿದೆ. ಕನ್ನಡಿಗರ ಕಿವಿ ಮೇಲೆ ಹೂವಿಟ್ಟಂತೆ ಅಲ್ಲಿಯೂ ಕಾಂಗ್ರೆಸ್ ಕಲರ್ ಕಲರ್ ಹೂವುಗಳು ಇಡುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಇಡುತ್ತಿರುವ ಕಲರ್ ಕಲರ್ ಹೂವುಗಳು ಎಂದು ಬಿಜೆಪಿ ಟ್ವೀಟ್ ದಿನಕ್ಕೆ 24 ಗಂಟೆ ಪ್ರತಿ ಮನೆಗೆ ಉಚಿತ ವಿದ್ಯುತ್, ಕರ್ನಾಟಕದಲ್ಲಿ ಇಲ್ಲ ಎಂದು ಟೀಕಿಸಿದೆ. ಮನೆ ಯಜಮಾನಿಗೆ 4 ಸಾವಿರ ಹಣ ಕೊಡುತ್ತೇವೆ, ಕರ್ನಾಟಕದಲ್ಲಿ 2 ಸಾವಿರ ಸಿಗುತ್ತಿಲ್ಲ..! ಯುವಕರಿಗೆ ಉದ್ಯೋಗ, ಯುವ ನಿ ಮೂಲಕ 3 ಸಾವಿರ ವೇತನ, ಕರ್ನಾಟಕದಲ್ಲಿ ಜಾರಿಗೆ ಬಂದೇ ಇಲ್ಲ ಎಂದು ವ್ಯಂಗ್ಯವಾಡಿದೆ.

ದಾಸ ಶ್ರೇಷ್ಠ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಾಣ : ಎಚ್‍ಡಿಡಿ

ಮಹಿಳೆಯರಿಗೆ ಉಚಿತ ಪ್ರಯಾಣ, ಕರ್ನಾಟಕದಂತೆ ತೆಲಂಗಾಣ ಸಾರಿಗೆ ನಿಗಮಗಳು ದಿವಾಳಿ ನಿಶ್ಚಿತ..!? ಅನ್ನಭಾಗ್ಯ 10 ಕೆಜಿ ಅಕ್ಕಿ ಉಚಿತ, ಕರ್ನಾಟಕದಲ್ಲಿ ಮೋದಿ ಸರ್ಕಾರದ 5 ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ..! ಸುಳ್ಳು ಹೇಳಿ ಅಧಿಕಾರ ಹಿಡಿದ ಕಾಂಗ್ರೆಸ್, ಕರ್ನಾಟಕದಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಸೋತಿದೆ ಎಂದು ಟೀಕೆ ಮಾಡಿದೆ.

ಈಗ ತೆಲಂಗಾಣದಲ್ಲಿ ಅದೇ ಸುಳ್ಳನ್ನು ಮತ್ತೆ ಹೇಳಿ, ರಾಜ್ಯದ ಅಮಾಯಕ ಜನರಿಗೆ ಟೋಪಿ ಹಾಕುವ ಯೋಜನೆಯಲ್ಲಿ ಕಾಂಗ್ರೆಸ್ ಇದೆ ಎಂದು ಎಂದು ಕುಟುಕಿದೆ.

RELATED ARTICLES

Latest News