ನಿತ್ಯ ನೀತಿ : ಅನ್ಯಾಯ ಮಾಡಿ ನೂರು ವರ್ಷ ಬದುಕುವ ಜೀವನಕ್ಕಿಂತ, ನ್ಯಾಯದಿಂದ ಇದ್ದು ಕೆಲವು ದಿನಗಳಾದರು ಗೌರವವಾಗಿ ಬದುಕುವುದೇ ಶ್ರೇಷ್ಠ.
ಪಂಚಾಂಗ : ಶುಕ್ರವಾರ, 03-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ಶ್ರವಣ / ಯೋಗ: ವಿಷ್ಕಂಭ / ಕರಣ: ಬವ
ಸೂರ್ಯೋದಯ – ಬೆ.5.58
ಸೂರ್ಯಾಸ್ತ – 06.50
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಮನೆಯಲ್ಲಿ ಜಗಳಗಳು ಉಂಟಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರಾಗಲಿದೆ.
ವೃಷಭ: ಮಕ್ಕಳು ಶಿಕ್ಷಣ ಹಾಗೂ ಸೃಜನಶೀಲ ಕ್ಷೇತ್ರ ಗಳಲ್ಲಿ ಆಸಕ್ತಿ ವಹಿಸುವರು.
ಮಿಥುನ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.
ಕಟಕ: ಉದ್ಯೋಗದಲ್ಲಿ ಬಡ್ತಿ ಹಾಗೂ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆ ಪಡೆಯಲು ಅವಕಾಶವಿದೆ.
ಸಿಂಹ: ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಆಲೋಚನೆ ಮಾಡದಿರಿ.
ಕನ್ಯಾ: ಸಂಗಾತಿಯ ಬೇಡಿಕೆಗಳು ನಿಮಗೆ ಸ್ವಲ್ಪ ಒತ್ತಡ ಉಂಟುಮಾಡಬಹುದು.
ತುಲಾ: ನಿಮ್ಮ ಅಹಂಕಾರದ ಕಾರಣಕ್ಕೆ ಹಣಕಾಸು ನಷ್ಟ ಅನುಭವಿಸಲಿದ್ದೀರಿ.
ವೃಶ್ಚಿಕ: ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡಬೇಡಿ
ಧನುಸ್ಸು: ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.
ಮಕರ: ಸ್ವಲ್ಪ ಹಣ ಬರುವುದು. ಆದರೂ ಅದು ಕೈಯಲ್ಲಿ ನಿಲ್ಲುವುದಿಲ್ಲ. ಮಿತವಾಗಿ ಬಳಸಿ.
ಕುಂಭ: ಮಧುಮೇಹ, ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಉಲ್ಬಣಿಸಬಹುದು.
ಮೀನ: ಕಾನೂನು ತೊಡಕು ಎದುರಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆಯಾಗಲಿದೆ.
