Friday, April 17, 2026
Homeರಾಷ್ಟ್ರೀಯಕಣ್ಣಿನ ಪೊರೆ ನೇತ್ರ ಶಸ್ತ್ರಚಿಕಿತ್ಸೆ ಬಳಿಕ ದೃಷ್ಟಿಯನ್ನೇ ಕಳೆದುಕೊಂಡ 9 ಮಂದಿ

ಕಣ್ಣಿನ ಪೊರೆ ನೇತ್ರ ಶಸ್ತ್ರಚಿಕಿತ್ಸೆ ಬಳಿಕ ದೃಷ್ಟಿಯನ್ನೇ ಕಳೆದುಕೊಂಡ 9 ಮಂದಿ

9 patients' eyes removed, 9 others lose vision after cataract surgery

ನವದೆಹಲಿ, ಫೆ.21- ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ಒಂಬತ್ತು ರೋಗಿಗಳ ಕಣ್ಣಿಗೆ ಸೋಂಕು ತಗುಲಿದರೆ, ಇತರ 9 ಮಂದಿ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.

ನ್ಯೂ ರಾಜೇಶ್‌ ಹೈಟೆಕ್‌ ಆಸ್ಪತ್ರೆಯಲ್ಲಿ ನಡೆದ ನೇತ್ರ ಶಿಬಿರದ ಸಂದರ್ಭದಲ್ಲಿ 30 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಗಳ 24 ಗಂಟೆಗಳಲ್ಲಿ, ಕನಿಷ್ಠ 18 ಜನರಿಗೆ ಸೋಂಕು ತಗುಲಿದೆ.

ಆಯುಷಾನ್‌ ಭಾರತ್‌ ಯೋಜನೆಯಡಿ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾ ಯಿತು. ಶಸ್ತ್ರಚಿಕಿತ್ಸೆಯ ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಮರುದಿನ ತೊಡಕುಗಳು ಉಂಟಾದವು ಎಂದು ರೋಗಿಗಳು ಆರೋಪಿಸಿದ್ದಾರೆ.

ನೇತ್ರ ಶಸ್ತ್ರಚಿಕಿತ್ಸೆ ಮಾಡಿಕೊಂಡ ಷಸ್ಥಿತಿ ಹದಗೆಟ್ಟ ಕಾರಣ ಅವರನ್ನು ದೆಹಲಿ, ಲಕ್ನೋ ಮತ್ತು ವಾರಣಾಸಿಯ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಒಬ್ಬ ರೋಗಿಯು ನಂತರ ಭಾಗಶಃ ದೃಷ್ಟಿ ಮರಳಿ ಪಡೆದಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಘಟನೆ ಸಂಬಂಧ ಆಸ್ಪತ್ರೆಯನ್ನು ಸೀಲ್‌ ಮಾಡಲಾಗಿದೆ ಮತ್ತು ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶಿಸಲಾಗಿದೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ, ಅವರ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ದೀಪಕ್‌ ಮೀನಾ ತಿಳಿಸಿದ್ದಾರೆ.

ಇದನ್ನು ಗಂಭೀರ ಲೋಪ ಎಂದು ಬಣ್ಣಿಸಿದ್ದು ವಿಚಾರಣಾ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೆಲವು ಹೆಚ್ಚು ಬಾಧಿತ ರೋಗಿಗಳು ದೆಹಲಿಯ ಏಮ್ಸೌ ಮತ್ತು ವಾರಣಾಸಿ ಮತ್ತು ಲಕ್ನೋದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಮತ್ತಷ್ಟು ಹರಡದಂತೆ ತಡೆಯಲು ವೈದ್ಯರು ಸೋಂಕಿತ ಕಣ್ಣನ್ನು ತೆಗೆದುಹಾಕಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಧಿತ ರೋಗಿಗಳಲ್ಲಿ ಒಬ್ಬರಾದ ಪರದೇಶಿ, ಫೆಬ್ರವರಿ 17 ರಂದು ದೆಹಲಿಯ ಏಮ್ಸೌನ ವೈದ್ಯರು ಶಸ್ತ್ರಚಿಕಿತ್ಸೆಗೊಳಗಾದ ಕಣ್ಣಿನಲ್ಲಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್‌ ಝಾ ಹೇಳಿದ್ದಾರೆ.

ಕೆಲವು ಹೆಚ್ಚು ಬಾಧಿತ ರೋಗಿಗಳು ದೆಹಲಿಯ ಏಮ್ಸೌ ಮತ್ತು ವಾರಣಾಸಿ ಮತ್ತು ಲಕ್ನೋದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಮತ್ತಷ್ಟು ಹರಡದಂತೆ ತಡೆಯಲು ವೈದ್ಯರು ಸೋಂಕಿತ ಕಣ್ಣನ್ನು ತೆಗೆದುಹಾಕಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಧಿತ ರೋಗಿಗಳಲ್ಲಿ ಒಬ್ಬರಾದ ಪರದೇಶಿ, ಫೆ.17ರಂದು ದೆಹಲಿಯ ಏಮ್ಸೌನ ವೈದ್ಯರು ಶಸ್ತ್ರಚಿಕಿತ್ಸೆಗೊಳಗಾದ ಕಣ್ಣಿನಲ್ಲಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಶಸ್ತ್ರಚಿಕಿತ್ಸೆಯ ಒಂದು ದಿನದ ನಂತರ ಗೋಲಾದ ಸಹ್ವಾನ್‌ ಅಲಿ ಅವರ ಕಷ್ಟವು ಹದಗೆಟ್ಟಿತು. ಮರುದಿನ ಕಣ್ಣಿನಿಂದ ರಕ್ತಸ್ರಾವವಾಗುತ್ತಿತ್ತು. ನಮನ್ನು ದೆಹಲಿಗೆ ಕರೆದೊಯ್ದರು. ವೈದ್ಯರು ಒಂದು ಕಣ್ಣನ್ನು ತೆಗೆದುಹಾಕಿದರು. ನನಗೆ ಇನ್ನು ಮುಂದೆ ನೋಡಲು ಸಾಧ್ಯವಿಲ್ಲ ಎಂದು ತಿಳಿಸಿದರು .

RELATED ARTICLES

Latest News