ನವದೆಹಲಿ, ಏ.5- ಇಲ್ಲಿನ ಉತ್ತಮ್ ನಗರದ ಬಾಡಿಗೆ ಮನೆಯೊಂಂದರಲ್ಲಿ ಇಬ್ಬರು ಸಹೋದರರ ಶವ ಪ್ತತೆಯಾಗಿದೆ. ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಇದು ಪೊಲೀಸ್ ತನಿಖೆಗೆ ಕಾರಣವಾಗಿದೆ.
ನಿನ್ನೆ ಸಂಜೆ 6.55 ರ ಸುಮಾರಿಗೆ ಉತ್ತಮ್ ನಗರ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ದ್ವಾರಕಾ ಜಿಲ್ಲೆಗೆ ಸೇರಿದ ಮೋಹನ್ ಗಾರ್ಡನ್ನಲ್ಲಿರುವ ಮೆಟ್ರೋ ಪಿಲ್ಲರ್ ಸಂಖ್ಯೆ 743 ರ ಬಳಿಯ ಮನೆಯೊಳಗೆ ಎರಡು ಶವಗಳು ಕಂಡುಬಂದಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡಗಳು ಅಪರಾಧ ಶಾಖೆಯ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರನ್ನು ಮೋಹನ್ ಗಾರ್ಡನ್ ನಿವಾಸಿ ದೇವೇಂದರ್ (50) ಮತ್ತು ಹಸ್ತಲ್ನ ಜೆಜೆ ಕಾಲೋನಿಯ ನಿವಾಸಿ ಅಮಿತ್ ಕುಮಾರ್ (48) ಎಂದು ಗುರುತಿಸಲಾಗಿದೆ.ಇಬ್ಬರೂ ಸಹೋದರರಾಗಿದ್ದು, ಇತ್ತೀಚೆಗೆ ಬಾಡಿಗೆಗೆ ಫ್ಲಾಟ್ಗೆ ಸ್ಥಳಾಂತರಗೊಂಡಿದ್ದರು.
ಕೆಲವೇ ದಿನಗಳ ಮೊದಲು ಇಬ್ಬರೂ ಫ್ಲಾಟ್ಗೆ ಸ್ಥಳಾಂತರಗೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಎರಡೂ ದೇಹಗಳಲ್ಲಿ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ, ಇದು ಸಾವಿಗೆ ಕಾರಣವನ್ನು ಅಸ್ಪಷ್ಟವಾಗಿಸಿದೆ.
ಶವಗಳನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಇದರಿಂದ ಸಾವಿನ ನಿಖರವಾದ ಕಾರಣ ತಿಳಿದುಬರಲಿದೆ.ಯಾವುದೇ ಸಂಭಾವ್ಯ ಸುಳಿವುಗಳನ್ನು ಗುರುತಿಸಲು ಮೃತರ ವೈಯಕ್ತಿಕ ಮತ್ತು ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುವ ಪ್ರಯತ್ನಗಳು ನಡೆಯುತ್ತಿವೆ.
ಮರಣೋತ್ತರ ಪರೀಕ್ಷೆಯ ವರದಿ ಮತ್ತು ನಡೆಯುತ್ತಿರುವ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ನಿಖರವಾದ ಕಾರಣ ಮತ್ತು ಸ್ವರೂಪವನ್ನು ನಿರ್ಧರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
