ಬೆಂಗಳೂರು,ಫೆ.6- ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಚಂದಾಪುರ ವಿಭಾಗದ 66/11ಕೆ.ವಿ ಸೂರ್ಯಘರ್, 66/11ಕೆವಿ ಸಮುದ್ರ, 66/11ಕೆವಿ ಆನೇಕಲ್, 66/11ಕೆವಿ ಹುಳಿಮಾವು ಉಪಕೇಂದ್ರ ವ್ಯಾಪ್ತಿಯಲ್ಲಿ ನಾಳೆ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸೂರ್ಯನಗರ, ಸಮಂದೂರು, 66ಕೆವಿ ಅತ್ತಿಬೆಲೆ ಲೈನ್, 66ಕೆವಿ ಸಮಂದೂರು ಲೈನ್, ಆನೇಕಲ್ ಟೌನ್, ಹುಲಿಮಂಗಲ, ನೀಲಾದ್ರಿ ರಸ್ತೆ, ಮರುಗೊಂಡನಹಳ್ಳಿ, ಸಾಯಿಬಾಬಾ ದೇವಸ್ಥಾನದ ರಸ್ತೆ, ನಂಜಾಪುರ, ಹುಲ್ಲಹಳ್ಳಿ ಗೇಟ್, ತಿರುಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
