Thursday, May 2, 2024
Homeಜಿಲ್ಲಾ ಸುದ್ದಿಗಳುಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನಾಯಕರು ಜೈಲು ಸೇರುವುದು ಗ್ಯಾರಂಟಿ : ಗೌತಮ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನಾಯಕರು ಜೈಲು ಸೇರುವುದು ಗ್ಯಾರಂಟಿ : ಗೌತಮ್

ಕೆಜಿಎಫ್,ಏ.14- ` ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷ ಕಳೆದಿದೆ ಆದರೆ ಚುನಾವಣೆ ಸಂದರ್ಭದಲ್ಲಿ ದೇಶದ ಮತದಾರರ ಬಳಿ ಹೊರ ದೇಶದಿಂದ ಕಪ್ಪು ಹಣವನ್ನು ವಾಪಸು ತರುವುದಾಗಿ ತಿಳಿಸಿದ್ದರು ಆದರೆ ಒಂದು ರೂಪಾಯಿ ಸಹ ನಮ್ಮ ದೇಶಕ್ಕೆ ಬರಲಿಲ್ಲ ಇದರ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು ನ್ಯಾಯಾಲಯದಲ್ಲಿ ಹೊರ ದೇಶದಲ್ಲಿ ಯಾವುದೇ ಕಪ್ಪು ಹಣವಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟರು ಇದರಿಂದ ತಿಳಿಯುತ್ತದೆ ಬಿಜೆಪಿ ಮುಖಂಡರು ಹೇಗೆ ದೇಶದ ಜನರನ್ನು ಯಾಮಾರಿ ಸುತ್ತಿದ್ದಾರೆ ‘ ಎಂದು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಹೇಳಿದರು.

ನಗರದ ಕಿಂಗ್ ಜಾರ್ಜಹಾಲ್ನಲ್ಲಿ ಶಾಸಕಿ ರೂಪಕಲಾಶಶಿಧರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಚಾರದಲ್ಲಿ ತೊಡಗಿರುವ ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿರುವ ಕೋವಿಡ್ ಸಂದರ್ಭದಲ್ಲಿ 20000 ಸಾವಿರ ಹಣವನ್ನು ಲೂಟಿ ಮಾಡಿದ ಚುನಾವಣಾ ಬಾಂಡ್ಗಳಲ್ಲಿ 6000 ಸಾವಿರ ಕೋಟಿ ಹಣವನ್ನು ದೋಚಿರುವ ಬಿಜೆಪಿ ಮುಖಂಡರನ್ನು ಜೈಲಿಗೆ ಅಟ್ಟುವುದಾಗಿ ಕೋಲಾರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೌತಮ ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಸಾಧನೆಯನ್ನು ಮಾಡಿದೆ ದೇಶದಲ್ಲಿ ನಿರ್ಮಿಸಲಾಗಿರುವ ಸೇತುವೆಗಳು, ಕಾರ್ಖಾನೆಗಳು ಎಲ್ಲವು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದು ಹೇಳಿ ರಾಜ್ಯದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಈಡೇರಿಸಿದೆ ಹಾಗೇ ಕೆಜಿಎಫ್ ನಗರದಲ್ಲಿ ಶೀಘ್ರದಲ್ಲೇ ಕಾರ್ಖಾನೆಗಳು ಪ್ರಾರಂಭಗೊಳ್ಳಲಿದೆ. ಇದಕ್ಕಾಗಿ ಸರ್ಕಾರ ಕೆಐಎಡಿಬಿಗೆ ಜಮೀನು ಹಸ್ತಾಂತರ ಮಾಡಿದೆ 2 ವರ್ಷದಲ್ಲಿ 10 ರಿಂದ 15 ಸಾವಿರ ನಿರುದ್ಯೋಗ ಯುವಕ ಯುವತಿಯಿರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಿದೆ ಎಂದು ಹೇಳಿದರು.

ಕೋಲಾರ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ, ಹಿರಿಯ ಕಾಂಗ್ರೆಸ್ ಮುಖಂಡರಾದ ವೆಂಕಟಕೃಷ್ಣರೆಡ್ಡಿ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾದಕೃಷ್ಣರೆಡ್ಡಿ, ಮುದುಲೈಮುತ್ತು, ಕೆಪಿಸಿಸಿ ಕಾರ್ಯದರ್ಶಿ ಕಾರ್ಥಿಕ್ , ಮಾಜಿ ಕೆಡಿಎ ಅಧ್ಯಕ್ಷ ಜಯಪಾಲ್, ನಗರಸಭೆ ಮಾಜಿ ಅಧ್ಯಕ್ಷರಾದ ವಳ್ಳಲ್ಮುನಿಸ್ವಾಮಿ, ರಮೇಶ್ಜೈನ್ ಮುತಾದವರು ಹಾಜರಿದ್ದರು.

RELATED ARTICLES

Latest News