Monday, May 4, 2026
Homeರಾಷ್ಟ್ರೀಯಬಂಗಾಳದಲ್ಲಿ ಟಿಎಂಸಿ ಕೋಟೆ ಬೇಧಿಸಿ ಬಿಜೆಪಿ ಭರ್ಜರಿ ಜಯಭೇರಿ, ವಿಜಯೋತ್ಸವಕ್ಕೆ ಆಯೋಗ ಅಡ್ಡಿ

ಬಂಗಾಳದಲ್ಲಿ ಟಿಎಂಸಿ ಕೋಟೆ ಬೇಧಿಸಿ ಬಿಜೆಪಿ ಭರ್ಜರಿ ಜಯಭೇರಿ, ವಿಜಯೋತ್ಸವಕ್ಕೆ ಆಯೋಗ ಅಡ್ಡಿ

Election Commission bans election victory celebrations in Bengal

ಕೋಲ್ಕತ್ತಾ,ಮೇ4- ತೃಣಮೂಲ ಕಾಂಗ್ರೆಸ್‌‍ ಪಕ್ಷದ ಕೆಂಪುಕೋಟೆಯನ್ನು ಕೆಡವಿ ಇತಿಹಾಸ ಬರೆದಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ ವಿಜಯೋತ್ಸವ ಮತ್ತು ಚುನಾವಣಾ ರ್ಯಾಲಿ ನಡೆಸುವಂತಿಲ್ಲ ಎಂದು ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೂ ಕಟ್ಟುನಿಟ್ಟಿನ ನಿಷೇಧ ಹೇರಿದೆ.

ಫಲಿತಾಂಶ ಪ್ರಕಟವಾದ ನಂತರ ರಾಜ್ಯದ ಯಾವುದೇ ಮೂಲೆಗಳಲ್ಲೂ ಅಭ್ಯರ್ಥಿಗಳು ಗೆಲುವನ್ನು ಸಂಭ್ರಮಿಸುವ ಮೆರವಣಿಗೆಗಳು ನಡೆಸಬಾರದು. ಅಭ್ಯರ್ಥಿಗಳು ಬಹಿರಂಗವಾಗಿ ರ್ಯಾಲಿಗಳನ್ನುಮಾಡಬಾರದು ಎಂದು ರಾಜ್ಯ ವಿಶೇಷ ಚುನಾವಣಾ ವೀಕ್ಷಕ ಸುಭ್ರತಾ ಗುಪ್ತ ಹೇಳಿದ್ದಾರೆ.

ವಿಜಯೋತ್ಸವ ರ್ಯಾಲಿ, ಸಂಭ್ರಮಾಚರಣೆ ಮಾಡುವುದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮವನ್ನು ತೆಗೆದುಕೊಂಡಿದ್ದೇವೆ. ಎಲ್ಲರೂ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಪಶ್ಚಿಮ ಬಂಗಾಳದಲ್ಲಿ ಎಲ್ಲಿಯೂ ಯಾವುದೇ ವಿಜಯೋತ್ಸವ ಆಚರಣೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

Latest News